ಮಿಹಿರದ್ವೀಪ

ಸ್ವರ್ಣಸಮುದ್ರದಿ ಪಯಣಿಸಿಹೆ
ರಜತತೀರವನು ನೂಕಿರುವೆ
ಜ್ಞಾನಭಾಸ್ಕರನ ತಲುಪಿರುವೆ
ಇಳೆಯಿರುಳಭಿಜಿತ್ ಸೋಕಿರುವೆ.

ದೃಷ್ಟಿದೀಪಿಸುವ ಕ್ಷೇತ್ರಗಳು
ಕೆಚ್ಚಿನ ಕಸುವಿನ ಬೆಟ್ಟಗಳು
ಹರ್ಷಜ್ವಾಲೆಯ ಶಿಖರಗಳು
ಕೇವಲ ಬೆಳಕಿನ ಗಾಳಿಯೊಳು.

ಆತ್ಮವಿಸ್ಕೃತಿಯ ಕಡಲುಗಳು
ರುದ್ರನಿದ್ರೆಗಳ ಗಿರಿದರಿಯು
ನನ್ನ ಜೀವದಾ ರಾಜ್ಯದೊಳು
ನಂದಾ ದ್ವೀಪಾವಳಿಗಳೊಳು.

ದೇವನೆ ದೇವ ಮೌನೋ ಮೌನ
ಕಾಲರಹಿತವಹ ಕಾಲದ ಅಯನ
ಅಲ್ಲಿ ಜೀವನವು ರಾಗದ ಮೂರ್ತಿ.
ಸತ್ಯ ವಿಚಾರವೆ ಛಂದಃಶಯನ

ಅಲ್ಲಿಯ ಬೆಳಕೇ ಸುತ್ತೂಮುತ್ತು.
ಇಲ್ಲಿಗೆ ಬಂದರು ಎತ್ತಲು ಇತ್ತು
ಅಮೃತ ಜ್ಞಾನವು ಇಳೆಗಿಳಿದಿತ್ತು
ಮೌನವ ಜನ್ಮದ ಗರ್ಭದಿ ಬಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ದಾರಿಯೊ!
Next post ವಾಗ್ದೇವಿ – ೪೦

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys